October 21, 2025
img-20250906-wa00295172317830614378692.jpg

ಉಡುಪಿ ಸೆ.5 :- ಕಳೆದ ಒಂದುವರೆ ತಿಂಗಳ ಹಿಂದೆ ಉಡುಪಿ ಜಿಲ್ಲೆಯ ಹೊರ ವಲಯದಲ್ಲಿ ತೀರಾ ಮನೋರೋಗಿಗಕ್ಕೆ ತುತ್ತಾದ ಯುವಕನನ್ನು ವಿಶುಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ತದನಂತರ ಆತನ ಊರಿಗೆ ಕಳುಹಿಸಿ ಕೊಟ್ಟಿದ್ದರು. ಇದೀಗ ಯುವಕ ಸಂಪೂರ್ಣ ಚೇತರಿಸಿಕೊಂಡಿದ್ದು ಕೆಲಸವೊಂದಕ್ಕೂ ಸೇರಿಕೊಂಡಿದ್ದಾನೆ. ಇಂದು ವಿಶುಶೆಟ್ಟಿಯವರಿಗೆ ಧನ್ಯವಾದವನ್ನು ತಿಳಿಸಲು ಉಡುಪಿಗೆ ಬಂದಿದ್ದು ವಿಶುಶೆಟ್ಟಿಯವರನ್ನು ಸಂಪರ್ಕಿಸಿ ಹೃದಯ ಪೂರ್ವಕ ಕೃತಜ್ಞತೆಯನ್ನು ಹೇಳಿ…ನೀವು ನೀಡಿದ ಸಹಾಯವನ್ನು

ನನ್ನ ಬದುಕಿನುದ್ದಕ್ಕೂ ನೆನೆಯುತ್ತೇನೆ ನಿಮ್ಮನ್ನು ಮರೆಯುವುದಿಲ್ಲವೆಂದು ಹೇಳಿದ್ದಾನೆ. ಈ ಸಮಯದಲ್ಲಿ ವಿಶುಶೆಟ್ಟಿಯವರು ಆತನಿಗೆ ವೈದ್ಯರು ತಿಳಿಸಿದಂತೆ ಔಷಧಿಯನ್ನು ಕ್ರಮಬದ್ದವಾಗಿ ತೆಗೆದುಕೊಳ್ಳಲು ಹೇಳಿದ್ದು ಖಂಡಿತವಾಗಿಯೂ ವೈದ್ಯರ ಸಲಹೆಯನ್ನು ಮೀರದೆ ಔಷಧಿಯನ್ನು ತೆಗೆದುಕೊಳ್ಳುವುದಾಗಿ ಭರವಸೆಯನ್ನು ನೀಡಿದ್ದಾನೆ. ಇಂತಹ ಒಂದು ಪ್ರಕರಣವು ನನ್ನ ಸೇವೆಗೆ ಸಂಪೂರ್ಣ ತೃಪ್ತಿ ನೀಡಿದೆ ಎಂದು ವಿಶುಶೆಟ್ಟಿಯವರು ತಿಳಿಸಿದ್ದಾರೆ

About The Author

Leave a Reply

Your email address will not be published. Required fields are marked *