ಮಲ್ಪೆ: ಕಡಲು ಪ್ರಕ್ಷುಬ್ಧ- ನಾಡ ದೋಣಿ ಮಗುಚಿ ಬಿದ್ದು ಮೀನುಗಾರ ಸಾವು

ಬೈಂದೂರು;ಮಲ್ಪೆ ನಾಡ ದೋಣಿ ಮಗುಚಿ ಬಿದ್ದ ಪರಿಣಾಮ ಮೀನುಗಾರ ಸಾವನ್ನಪ್ಪಿದ ಘಟನೆ ಉಡುಪಿಯ ಪಡುಕೆರೆ ಕಡಲ ತೀರದಲ್ಲಿ ಇಂದು ಸಂಭವಿಸಿದೆ.
ಪಿತ್ರೋಡಿ ನಿವಾಸಿ, ಮೀನುಗಾರ ನೀಲು (48) ಮೃತ ವ್ಯಕ್ತಿ. ಸಮುದ್ರ ದಲ್ಲಿ ಗಾಳಿ ಮಳೆಯ ತೀವ್ರತೆ ಜೋರಾಗಿದ್ದು ಸಮುದ್ರದ ಅಲೆಯ ಹೊಡೆತಕ್ಕೆ ಇವರಿದ್ದ ನಾಡದೋಣಿ ಮಗುಚಿ ಬಿದ್ದಿದೆ.ಈ ವೇಳೆ ನೀಲು ಅವರು ದೋಣಿಯಲ್ಲಿರುವ ಬಲೆಗಳು ಮಗುಚಿದರಿಂದ ಬಲೆಗಳ ನಡುವೆ ಸಿಲುಕಿ ಮೃತಪಟ್ಟಿದ್ದಾರೆ. ಆಪದ್ಭಾಂಧವ ಈಶ್ವ‌ರ್ ಮಲ್ಪೆ ಮತ್ತು ತಂಡ ಮೃತದೇಹವನ್ನು ಮೇಲಕ್ಕೆತ್ತಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲು ಸಹಕರಿಸಿತು.ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About Janardhana K M

Check Also

ಗುರುಪೂರ್ಣಿಮೆಯ ಪ್ರಯುಕ್ತ ಬೈಂದೂರು ಕ್ಷೇತ್ರದ ಸಿದ್ದ ಸಮಾಧಿ ಯೋಗ ಸಾಧಕರ ವತಿಯಿಂದ ನಾಗೂರು ಶ್ರೀ ಲಲಿತ ಕೃಷ್ಣ ಸಭಾಭವನದಲ್ಲಿ ಗುರುಪೂರ್ಣಿಮಾ ಸಂಬ್ರಮ .

ಬೈಂದೂರು ; ಗುರುಪೂರ್ಣಿಮೆಯ ಪ್ರಯುಕ್ತ ಬೈಂದೂರು ಕ್ಷೇತ್ರದ ಸಿದ್ದ ಸಮಾಧಿ ಯೋಗ ಸಾಧಕರ ವತಿಯಿಂದ ನಾಗೂರು ಶ್ರೀ ಲಲಿತ ಕೃಷ್ಣ …

Leave a Reply

Your email address will not be published. Required fields are marked *