ಭಯದ ರಂಪಾಟ ನಡೆಸಿದ ಮಾನಸಿಕ ಅಸ್ವಸ್ಥ ; ವಿಶುಶೆಟ್ಟಿಯಿಂದ ರಕ್ಷಣೆ

ಉಡುಪಿ ಡಿ.11 ಉಡುಪಿಯ ಕಲ್ಪನಾ ಟಾಕೀಸ್ ನ ಮುಖ್ಯ ರಸ್ತೆಯಲ್ಲಿ ಮುಂಭಾಗದಲ್ಲಿ ಯುವಕನೊಬ್ಬ ಭೀಕರ ಮಾನಸಿಕ ಅಸ್ವಸ್ಥತೆಗೆ ಒಳಗಾಗಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು ರಾತ್ರಿಯ ಹೊತ್ತು ಭಯದ ವಾತಾವರಣ ಸೃಷ್ಟಿಸಿದ್ದ. ಮಾತನಾಡಿಸುವ ಸಂದರ್ಭದಲ್ಲಿ ಹಲ್ಲೆ ನಡೆಸಿ ತಪ್ಪಿಸಿ ಓಡಿ ಹೋಗಲು ಪ್ರಯತ್ನಿಸುತ್ತಿದ್ದ. ದುರಂತ ಅರಿತ ಸಾರ್ವಜನಿಕರು ಈ ಬಗ್ಗೆ ಪೊಲೀಸ್ ಇಲಾಖೆಗೆ ದೂರು ನೀಡಿದ್ದು, ಪೊಲೀಸರ ವಿನಂತಿಯ ಮೇರೆಗೆ ವಿಶು ಶೆಟ್ಟಿಯವರು ಬಂದು ಸಾರ್ವಜನಿಕರ ಸಹಾಯದಿಂದ ರಕ್ಷಿಸಿ ಬಾಳಿಗ ಆಸ್ಪತ್ರೆಗೆ ದಾಖಲಿಸುವ ಮುಖಾಂತರ ದುರಂತ ತಪ್ಪಿಸಿದ್ದಾರೆ.

Read
ರಕ್ಷಣಾ ಸಮಯ ಪೊಲೀಸ್ ಹೆಚ್ ಸಿ ರಾಜೇಶ್, ರಿಕ್ಷಾ ಚಾಲಕ ಮಂಜುನಾಥ್, ಶ್ರೀರಾಮ ಹಾಗೂ ಸಾರ್ವಜನಿಕರು ಸಹಕರಿಸಿದ್ದಾರೆ.