ತೀರಾ ಅಸ್ವಸ್ಥ ವ್ಯಕ್ತಿಯ ರಕ್ಷಣೆ :ವಿಶು ಶೆಟ್ಟಿ ಸಮಾಜ ಸೇವೆಗೆ ಸಾರ್ವಜನಿಕರಿಂದ ಪ್ರಸಂಸೆ

ಉಡುಪಿ :ನ 12 :ಉದ್ಯಾವರ ಬಸ್ ನಿಲ್ದಾಣದಲ್ಲಿ ಮನನೊಂದ ದೈಹಿಕವಾಗಿ ತೀರಾ ಅಶಕ್ತರಾಗಿ ನಡೆಯಲಾಗದೆ ಕಳೆದ 25 ದಿನಗಳಿಂದ ಬಸ್ ನಿಲ್ದಾಣದಲ್ಲಿ ವಾಸ್ತವ್ಯಗೊಂಡಿದ್ದ ವ್ಯಕ್ತಿಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿರುತ್ತಾರೆ.
ವ್ಯಕ್ತಿಯ ಹೆಸರು ದಿನೇಶ್ (ಪ್ರಾಯ 40) ತಂದೆ :ಸೋಮಯ್ಯ, ಸ್ಥಳೀಯ ನಿವಾಸಿ ಎಂಬ ಮಾಹಿತಿ ಲಭ್ಯವಾಗಿದ್ದು, ರೋಗಿಯು ಮಾತನಾಡುವ ಸ್ಥಿತಿಯಲ್ಲಿ ಇಲ್ಲದಿರುವುದರಿಂದ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಬಸ್ ನಿಲ್ದಾಣದಲ್ಲಿ ನಿಲ್ಲಲು ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು ಈ ಬಗ್ಗೆ ಸ್ಥಳೀಯ ಮಹಿಳೆಯರು ಸಹಕರಿಸುವಂತೆ ವಿಶು ಶೆಟ್ಟಿಯವರಲ್ಲಿ ಮನವಿ ಮಾಡಿದ್ದು, ಮನವಿಗೆ ಸ್ಪಂದಿಸಿದ ವಿಶು ಶೆಟ್ಟಿಯವರು ಆಂಬುಲೆನ್ಸ್ ಮುಖಾಂತರ ಜಿಲ್ಲಾಸ್ಪತ್ರೆಗೆ ದಾಖಲಿಸಿರುತ್ತಾರೆ.
`
ರೋಗಿಯು ಅದೆಷ್ಟು ದಿನಗಳಿಂದ ಸ್ನಾನ ಮಾಡದೇ ಧರಿಸಿದ ಕೊಳಕು ಬಟ್ಟೆಯಿಂದ ಕಾಲ ಕಳೆಯುತ್ತಿರುವುದರಿಂದ ಸುತ್ತಮುತ್ತಲು ದುರ್ವಾಸನೆ ಬರುತ್ತಿತ್ತು.
ಸಂಬಂಧಿಕರು ಉಡುಪಿ ಜಿಲ್ಲಾಸ್ಪತ್ರೆ ಸಂಪರ್ಕಿಸಬೇಕಾಗಿ ಕೋರಲಾಗಿದೆ.