October 22, 2025
img_20250615_1106327500324460820949940.jpg

86 ರಕ್ತ ಯುನಿಟ್ ಸಂಗ್ರಹ

ಬೈಂದೂರು ;ಮರವಂತೆ ರಕ್ತದಾನ ಬಳಗ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್, ಕುಂದಾಪುರ ರೆಡ್ ಕ್ರಾಸ್ ಸಂಸ್ಥೆ, ವತಿಯಿಂದ ಪ್ರಶಾಂತ್ ಪೂಜಾರಿ ತಲ್ಲೂರು ಮತ್ತು ದಿನೇಶ್ ಕಾಂಚನ್ ಬಾಳಿಕೇರಿ ಇವರಿಗೆ ಸನ್ಮಾನಿಸಲಾಯಿತು
ಬೈಟ್ 1 ಸತ್ಯನಾರಾಯಣ ಪುರಾಣಿಕ,;ಕುಂದಾಪುರ ರೆಡ್ ಕ್ರಾಸ್ ಅಧಿಕಾರಿಗಳು ಮಾತಾಡಿ,  ಯಾವುದೇ ವ್ಯಕ್ತಿ ಬೇರೆ ಯವರಿಗೆ ದಾನ ಮಾಡಿದಾಗ ದಾನ ಮಾಡಿದವನಿಗೆ ನಷ್ಟವಾಗುತ್ತದೆ ಇನ್ನೊಬ್ಬರಿಗೆ ಲಾಭವಾಗುತ್ತದೆ ಅದೇ ರಕ್ತದಾನ ಮಾಡಿದಾಗ ಇಬ್ಬರಿಗೂ ಲಾಭವಾಗುತ್ತದೆ ಕಾರಣ ಅಷ್ಟೇ ರಕ್ತದಾನ ಒಬ್ಬ ವ್ಯಕ್ತಿ ದಾನ ಮಾಡಿದ ನಂತರ ಅವನಲ್ಲಿ ಹೊಸ ರಕ್ತಕಣಗಳು ಹುಟ್ಟುಕೊಳ್ಳುತ್ತದೆ ಅದೇ ರಕ್ತ ಇನ್ನೊಬ್ಬರಿಗೆ ದಾನ ಮಾಡಿದಾಗ ಅವರ ಜೀವನ ಉಳಿಯುತ್ತದೆ ,
ಬೈಟ್ 2 ಸತೀಶ್‌ ಸಾಲಿಯ್ಯನ್;  ಒಬ್ಬ ರೋಗಿಗೆ ರಕ್ತದಾನ ಮಾಡೋದು ತುಂಬಾ ಕಷ್ಟ

ಆಸ್ಪತ್ರೆಯಲ್ಲಿ ಅದು ರೋಗಿಗೆ ರಕ್ತ ಬೇಕಾದಾಗ ಅವರಿಗೆ ಒದಗಿಸುವುದು ತುಂಬಾ ಕಷ್ಟ ಆದರೆ ಇಂಥ  ಸಂಘ-ಸಂಸ್ಥೆಗಳಿಂದ ಸ್ವಯಂಪ್ರೇರಿತ ರಕ್ತದಾನ ಮಾಡಿದಾಗ ನಮಗೆ ರಕ್ತವನ್ನು ಪೂರೈಸಲು ಸುಲಭವಾಗುತ್ತದೆ ಆದರೆ ಹೆಚ್ಚಿನ ಆಸ್ಪತ್ರೆ ರಕ್ತದ ಕೊರತೆ ಇರುತ್ತದೆ, ಆವಾಗ ರಕ್ತ ನೀಡುವರು ತುಂಬಾ  ವಿರಳ.

ರಕ್ತದಾನಿ ಬಳಗ ಮರವಂತೆ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಕುಂದಾಪುರ ರೆಡ್ ಕ್ರಾಸ್ ಸಂಸ್ಥೆ,ಇವರ ನೇತೃತ್ವದಲ್ಲಿ, ಮರವಂತೆ ಮೀನುಗಾರ ಸಹಕಾರಿ  ಸಂಘ ,ಸತ್ತೀಶ್ ಪೂಜಾರಿ ಉದ್ಯಮಿ ಮಂಜುನಾಥ ಪೂಜಾರಿ ಇವರ ಸಹಭಾಗಿತ್ವದಲ್ಲಿ ಮರವಂತೆಯ ಸಹಕಾರಿ ಶಾಲೆ ಯಲ್ಲಿ ಸುಮಾರು 86 ಯುನಿಟ್ ರಕ್ತ ಸಂಗ್ರಹವಾಗಿದೆ,

ಇದೇ ಸಮಯದಲ್ಲಿ ಬೈಂದೂರು ಶಾಸಕರಾದ ಗುರುರಾಜ್ ಗಂಟಿ ಹೊಳೆ ಭೇಟಿ ನೀಡಿ ದಾನಿಗಳಿನ್ನು ಪ್ರೋತ್ಸಾಹಿಸಿದರು,

ಮರವಂತೆ ಮೀನುಗಾರ ಸಂಘದ ಸದಸ್ಯರು, ರಕ್ತದಾನಿ ಬಳಗ ಮರವಂತೆಯ ಸದಸ್ಯರು, ರಾಮ ಮಂದಿರ ಅಧ್ಯಕ್ಷ ರಾದ ಸುರೇಶ್ ಖಾರ್ವಿ,ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ನಾಗರಾಜ್,ಮಾಜಿ ಅಧ್ಯಕ್ಷ ರಾದ ಲೋಕೇಶ್, ವಿಶ್ವನಾಥ್, ಶರತ್ ಶೆಟ್ಟಿ, ಕೃಷ್ಣ ಆಚಾರಿ, ಸತ್ತಿಶ್ ಸ್ಯಾಲಿಯನ್  ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು

About The Author

Leave a Reply

Your email address will not be published. Required fields are marked *