ಬೈಕ್ ಡಿಕ್ಕಿ ; ಗಾಯಾಳು ಆಸ್ಪತ್ರೆಗೆ ದಾಖಲು

ಉಡುಪಿ ನ.19 :- ಅಂಬಲಪಾಡಿ ಸರ್ವಿಸ್ ರಸ್ತೆಯಲ್ಲಿ ಯುವಕನೊಬ್ಬ ರಾತ್ರಿ ಹೊತ್ತು ಚಿರಾಡುತ್ತಿರುವುದನ್ನು ಕಂಡ ವಿಶು ಶೆಟ್ಟಿ ಅಂಬಲಪಾಡಿಯವರು ವಿಚಾರಿಸಿದಾಗ ಬೈಕ್ ಒಂದು ಡಿಕ್ಕಿ ಹೊಡೆದು ಪರಾರಿ ಆಗಿದ್ದು, ಎಂಬ ಮಾಹಿತಿ ನೀಡಿದ್ದಾನೆ. ಆ ಕೂಡಲೇ ವಿಶುಶೆಟ್ಟಿಯವರು ಗಾಯಾಳುವನ್ನು 108 ಆ್ಯಂಬುಲೆನ್ಸ್‌ ಮೂಲಕ ಜಿಲ್ಲಾಸ್ಪತ್ರೆಗೆ ಯುವಕನನ್ನು ದಾಖಲಿಸಿದ್ದಾರೆ.

ಗಾಯಾಳು ಹೆಸರು ಮಾಂತೇಶ್ (30 ವರ್ಷ). ಸೊಂಟದ ಎಲುಬಿಗೆ ತೀವ್ರವಾದ ಪೆಟ್ಟು ಬಿದ್ದಿದ್ದು ಮೂಳೆ ಮುರಿದಿದೆ, ಗಾಯಾಳು ನೋವಿನಿಂದ ಚಿರಾಡುತ್ತಿದ್ದಾನೆ. ಈ ಬಗ್ಗೆ ಸಂಚಾರಿ ಠಾಣೆಗೆ ವಿಶುಶೆಟ್ಟಿ ಮಾಹಿತಿ ನೀಡಿದ್ದಾರೆ.

About Janardhana K M

Check Also

ತಾಯಿಯನ್ನು ರಾಡ್‌ನಿಂದ ಕೊಂದ ಪಾಪಿ ಮಗ

By NEWS DESK2ಬೆಂಗಳೂರು: ಕುಡಿಯಲು ಹಣ ಕೊಡದೇ ಇದ್ದದ್ದಕ್ಕೆ ತನ್ನ ಸ್ವಂತ ತಾಯಿಯನ್ನೇ ಮಗನು ರಾಡ್ ನಿಂದ ಹೊಡೆದು ಕೊಂದ …

Leave a Reply

Your email address will not be published. Required fields are marked *