ಮೇ ಹತ್ತರಂದು ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದ ಈ ಅದ್ದೂರಿಯ ಒಂದು ದಿನದ ಕಾರ್ಯಕ್ರಮದ ಎರಡನೇಯ ಸಭೆಯ ಚರ್ಚೆ
ಬೈಂದೂರು ತಾಲೂಕಿನಲ್ಲಿ ನಡೆಯುವ ಮೇ ಹತ್ತರಂದು ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದ ಈ ಅದ್ದೂರಿಯ ಒಂದು ದಿನದ ಕಾರ್ಯಕ್ರಮ ನಡೆಯಲು ಸಕಲ ಸಿದ್ದತೆ ನಡೆಯುತ್ತಿದ್ದುಶ್ರೀಯುತ ಆಚಾರ್ಯ ಕೇಶವ ಗುರೂಜಿ ಮತ್ತು ಅಧ್ಯಕ್ಷರಾದ ದಿವಾಕರ ಶೆಟ್ಟಿ ಯವರ ನೇತೃತ್ವದಲ್ಲಿ ಇಂದು ಉಪ್ಪುಂದ ಮಾತಶ್ರೀ ಹಾಲ್ನಲ್ಲಿ ಎರಡನೆಯ ಸಭೆ ನಡೆಯಿತು ಈ ಸಭೆ ಯಲ್ಲಿ ಆಯಾಯ ಕಮಿಟಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಈ ಸಭೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚ ತಗಲಬಹುದು,ಈ ಎಲ್ಲಾ ಕಾರ್ಯಕ್ರಮಗಳು ಭಕ್ತರಿಂದಲೆ ನಡೆಯಬೇಕು ಎಂಬ ಸಂಕಲ್ಪದಿಂದ ಬೈಂದೂರು ತಾಲೂಕಿನ ಜನತೆಗೆ ಇದೊಂದು ಐತಿಹಾಸಿಕ ಕ್ಷಣ,ಈ ಭಗವಂತನ ಕಲ್ಯಾಣೋತ್ಸವನ್ನು ಕಣ್ಣು ತುಂಬಿಸಿಕೊಳ್ಳುವುದೆ ಒಂದು ಭಾಗ್ಯ…. ಎಂದು ಆಚಾರ್ಯ ಕೇಶವ ಗುರೂಜಿಯವರ ಆಶಯ