February 28, 2026
img-20260227-wa01171247228685061892147.jpg

ಕರಾವಳಿ ಗಂಡು ಕಲೆ ಯಕ್ಷಗಾನದ ಚಂಡೆ ಸಾಧಕ ಸುಶಾಂತ್ ಆಚಾರ್ಯ ಅವರಿಗೆ ‘ಪ್ರತಿಭಾ ಪುರಸ್ಕಾರ’ ಗೌರವ

ಕುಂದಾಪುರ: ಕರಾವಳಿ ಭಾಗದ ಗಂಡು ಕಲೆ ಯಕ್ಷಗಾನವು ಕೇವಲ ಕಲೆಯಲ್ಲ, ಅದೊಂದು ಸಂಸ್ಕಾರ. ಈ ಕ್ಷೇತ್ರದಲ್ಲಿ ತನ್ನದೇ ಆದ ಯಕ್ಷಗಾನದ ಚೆಂಡೆಯಲ್ಲಿ ಯಕ್ಷಗಾನ ಪ್ರಿಯರನ್ನು ತನ್ನತ್ತ ಸೆಳೆಯುವ ಕಲಾ ವೇದಿಕೆಯಲ್ಲಿ ಛಾಪು ಮೂಡಿಸುತ್ತಿರುವ ಯುವ ಪ್ರತಿಭೆ ಸುಶಾಂತ್ ಆಚಾರ್ಯ ಕಟ್ ಬೆಲ್ಲೂರ್ ಹೆಮ್ಮಾಡಿ ಅವರಿಗೆ ಇತ್ತೀಚಿಗೆ ಅರಾಟೆಯಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಅದ್ದೂರಿ ಸನ್ಮಾನ ನೆರವೇರಿತು.

ಹೊಸಾಡು ಗ್ರಾಮದ ಅರಾಟೆಯ ಶ್ರೀ ಉಮ್ಮಲ್ತಿ ಮನೆ ದೈವಸ್ಥಾನದಲ್ಲಿ ಇತ್ತೀಚೆಗೆ ಜರುಗಿದ ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಮಾರಣಕಟ್ಟೆ (ಶ್ರೀ ಬ್ರಹ್ಮಲಿಂಗೇಶ್ವರ ದಶಾವತಾರ ಯಕ್ಷಗಾನ ಮಂಡಳಿ) ಮೇಳದ ಕಾಲಮಿತಿ ಪ್ರದರ್ಶನದ ಸೇವಕರ್ತರಾದ ಶ್ರೀಮತಿ ನಿಶಾ ಜಯಕುಮಾ‌ರ್ ರವರ ಹರಕೆ ಬಯಲಾಟದ ರಂಗಸ್ಥಳ ದಲ್ಲಿ ಈ ಕಾರ್ಯಕ್ರಮ ನಡೆಯಿತು.

ಯಕ್ಷಗಾನ ರಂಗದಲ್ಲಿ ಸುಶಾಂತ್ ಆಚಾರ್ಯ ಅವರು ಇದುವರೆಗೂ ನೀಡಿರುವ ಸೃಜನಶೀಲ ಕೊಡುಗೆ ಹಾಗೂ ಅವರ ಕಲಾ ಸಾಧನೆಯನ್ನು ಪರಿಗಣಿಸಿ, ರಿಂಗ್ ಫ್ರೆಂಡ್ಸ್‌ ಆರಾಟೆ ಹಾಗೂ ಹೊಸಾಡು ಗ್ರಾಮದ ಸಮಸ್ತ ಗ್ರಾಮಸ್ಥರು ಒಗ್ಗೂಡಿ ಅವರಿಗೆ ‘ಪ್ರತಿಭಾ ಪುರಸ್ಕಾರ’ ನೀಡಿ ಗೌರವಿಸಿದರು.

“ಯುವ ಕಲಾವಿದರು ಕಲೆಯ ಬೇರನ್ನು ಗಟ್ಟಿಯಾಗಿ ಹಿಡಿದಾಗ ಮಾತ್ರ ಸಾಂಸ್ಕೃತಿಕ ಪರಂಪರೆ ಉಳಿಯಲು ಸಾಧ್ಯ. ಸುಶಾಂತ್ ಅವರ ಶ್ರಮ ಮತ್ತು ಕಲಾ ಪ್ರೇಮ ಇಂದಿನ ಪೀಳಿಗೆಗೆ ಮಾದರಿ,” ಎಂದು ಸಂಘಟಕರು ಈ ಸಂದರ್ಭದಲ್ಲಿ ಶ್ಲಾಘಿಸಿದರು.

ಈ ಸುಸಂದರ್ಭದಲ್ಲಿ ಸೇವಕರ್ತರಾದ ಹೆರಿಯ ನಾಯ್ಕ ಕುಟುಂಬದವರು ಸೇರಿದಂತೆ ಗ್ರಾಮದ ಪ್ರಮುಖರು, ಕಲಾಭಿಮಾನಿಗಳು ಹಾಗೂ ರಿಂಗ್ ಫ್ರೆಂಡ್ಸ್ ಸದಸ್ಯರು ಉಪಸ್ಥಿತರಿದ್ದು, ಸಾಧಕ ಕಲಾವಿದನಿಗೆ ಶುಭ ಹಾರೈಸಿದರು.

ಸುಶಾಂತ್ ಆಚಾರ್ಯ ರವರ ಕಲಾ ಸಾಧನೆ ಇನ್ನಷ್ಟು ಉತ್ತಂಗಕ್ಕೆ ಏರಲಿ ಎನ್ನುವುದೇ ಯಕ್ಷ ಅಭಿಮಾನಿಗಳ ಅಭಿಪ್ರಾಯವಾಗಿದೆ

7:39

About The Author

Leave a Reply

Your email address will not be published. Required fields are marked *