October 22, 2025
IMG-20240615-WA0035.jpg

ಪುತ್ತೂರು: ಸುಮುಖ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ‘ತುಡ‌ರ್’ ತುಳು ಸಿನೆಮಾ ಕರಾವಳಿಯಾದ್ಯಂತ ನಿನ್ನೆ ಬಿಡುಗಡೆಯಾಗಿದ್ದು, ಇಂದು ಪುತ್ತೂರಿನ ಭಾರತ್ ಸಿನಿಮಾಸ್ ನಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕರಾವಳಿಯಾದ್ಯಂತ ತುಡರ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರಮಂದಿರದತ್ತ ಸಿನಿ ಪ್ರೇಮಿಗಳು ಹೆಜ್ಜೆ ಹಾಕುತ್ತಿದ್ದಾರೆ.

ಇನ್ನು ಪುತ್ತೂರಿನಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ದೀಪ ಪ್ರಜ್ವಲಿಸಿ ಚಿತ್ರಕ್ಕೆ ಶುಭ ಹಾರೈಸಿದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಸಂಜೀವ ಮಠಂದೂರು, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಆರ್ಯಾಪು ಗ್ರಾ.ಪಂ ಪಿಡಿಒ ನಾಗೇಶ್, ಅವರು ಚಿತ್ರದ ಯಶಸಸ್ಸಿಗೆ ಶುಭ ಹಾರೈಸಿದರು. ಬಿಜೆಪಿ ಪ್ರಮುಖರಾದ ಯವರಾಜ್‌ ಪೆರಿಯತ್ತೋಡಿ, ವಿಶ್ವನಾಥ ಕುಲಾಲ್‌, ಹರಿಪ್ರಸಾದ್ ಯಾದವ್, ಕಾಂಗ್ರೆಸ್‌ ಪ್ರಮುಖ ಪೂರ್ಣೇಶ್, ಚಿತ್ರದ

ನಾಯಕ ನಟ ಸಿದ್ದಾರ್ಥ್, ನಾಯಕಿ ನಟ ದೀಕ್ಷಾ ಬಿಸೆ ಚಿತ್ರದ ಕುರಿತು ಮಾತನಾಡಿದರು. ಚಿತ್ರದ ನಿರ್ಮಾಪಕ ಹರೀಶ್ ಶೆಟ್ಟಿ, ನಿರ್ದೇಶಕರಾದ ತೇಜೇಶ್ ಪೂಜಾರಿ ಎ, ಮೋಹನ್ ರಾಜ್ ಉಪಸ್ಥಿತರಿದ್ದರು. ಶರತ್‌ ಆಳ್ವ ಕೂರೆಲು ಕಾರ್ಯಕ್ರಮ ನಿರೂಪಿಸಿದರು. ಚಿತ್ರದ ವಿತರಕ ಬಾಲಕೃಷ್ಣ ಕುಕ್ಕಾಡಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು

ಇನ್ನು ತುಡ‌ರ್ ಚಿತ್ರ ಸಸ್ಪೆನ್ಸ್, ಡ್ರಿಲ್ಲರ್ ನಿಂದ ಕೂಡಿದ್ದು, ಇದುವರೆಗೆ ಬಂದ ತುಳು ಸಿನೆಮಾಗೆ ಹೋಲಿಸಿದ್ದಲ್ಲಿ ಕೊಂಚ ಭಿನ್ನವಾಗಿದೆ. ಚಿತ್ರದಲ್ಲಿ ನಾಯಕ ಪಾತ್ರ ನಿರ್ವಹಿಸಿದ ನಟ ಸಿದ್ಧರ್ಥ್ ನಟನೆ ಜನರನ್ನ ಆಕರ್ಷಿಸಿದೆ. ಉಳಿದಂತೆ ನಟಿ ದೀಕ್ಷಾ ಬಿಸೆ ಕೂಡ ಅಭಿನಯದಲ್ಲಿ ಮಿಂಚಿದ್ದಾರೆ. ಉಳಿದಂತೆ ಚಿತ್ರದ ಛಾಯಾಗ್ರಹನ ಸೂಪ‌ರ್ ಎಂಬಂತ ಸಿನಿ ರಸಿಕರು ತಮ್ಮ ಅಭಿಪ್ರಯಾ ವ್ಯಕ್ತಪಡಿಸಿದ್ದಾರೆ. ಕಾಮಿಡಿ ನಟನೆಯಲ್ಲಿ ಅರವಿಂದ ಬೋಲಾರ್ ಎಂದಿನಂತೆ ಸಿನಿರಸಿಕರ ಮನವನ್ನ ನಗೆಗಡಲಲ್ಲಿ ತೇಲಿಸಿದ್ದಾರೆ.

About The Author

Leave a Reply

Your email address will not be published. Required fields are marked *