

ಯುವತಿಯಿಂದ ಸಿಕ್ಕ ಮಾಹಿತಿಯ ಆಧಾರದಲ್ಲಿ ಸಖಿ ಸೆಂಟರಿನವರು ಮನೆಯವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ದಿನಾಂಕ ಎಪ್ರಿಲ್.13 ರಂದು ಯುವತಿಯ ತಂದೆ ಹಾಗೂ ಸಹೋದರಿ ಉಡುಪಿಗೆ ಬಂದು ಕಾನೂನು ಪ್ರಕ್ರಿಯೆಯನ್ನು ಸಖಿ ಸೆಂಟರಿನಲ್ಲಿ ತಂದೆಯ ವಶ ಒಪ್ಪಿಸಲಾಯಿತು. ಆಸ್ಪತ್ರೆಯ ವೆಚ್ಚ ಭರಿಸಲು ಕಡು ಬಡತನದಿಂದ ಕೂಡಿದ್ದು ಅವರ ತಂದೆ ಅಸಹಾಯಕರಾದಾಗ ವಿಶು ಶೆಟ್ಟಿ ಅವರು ಹಣವನ್ನು ಭರಿಸಿದರು
.
ಮಗಳು ಕಳೆದ ವರ್ಷ ದ್ವೀತಿಯ ಪಿ.ಯು.ಸಿ ಯಲ್ಲಿ ಅನುತೀರ್ಣಳಾದಾಗ ಮಾನಸಿಕ ಖಾಯಿಲೆಗೆ ತುತ್ತಾಗಿದ್ದಳು. ಕಾಣೆಯಾದಾಗ ಹುಡುಕಿ ಸಿಗದಿದ್ದಾಗ, ಪೋಲಿಸ್ ದೂರು ನೀಡಲು ಮುಂದಾದಾಗ ಉಡುಪಿಯಲ್ಲಿ ಇರುವ ಬಗ್ಗೆ ಮಾಹಿತಿ ಲಭಿಸಿತು. ಸಹಕರಿಸಿದ ವಿಶುಶೆಟ್ಟಿ ಹಾಗೂ ಸಖಿ ಸಂಟರಿನರು ನೀಡಿದ ನೆರವು ಹಾಗೂ ಮಾನವೀಯತೆಗೆ ಋಣಿಯಾಗಿದ್ದೇನೆ.