October 23, 2025
img_20250629_1154102356674058887648834.jpg
ರಾಣಿ ಬಲೆ ಮೀನುಗಾರರ ಒಕ್ಕೂಟ(ರಿ)  ಉಪ್ಪುಂದ ಸಂಘದ ವಾರ್ಷಿಕ ಮಹಾಸಭೆ   ಕರ್ನಾಟಕ ಖಾರ್ವಿ ಯಾನೇ ಹರಿಕಾಂತ ಮಹಾಜನಸಂಘದಲ್ಲಿ ನಡೆಯಿತು ಸಂಘದ ಅಧ್ಯಕ್ಷ ರಾದ ವೆಂಕಟರಮಣ ಖಾರ್ವಿ ಸಂಘದ ಅಧ್ಯಕ್ಷತೆ ವಹಿಸಿ ಮಾತನ್ನಾಡಿ ಸಂಘದ ಸರ್ವತೋಮುಖ ಬೆಳವಣಿಗೆಗೆ ಸದಸ್ಯರ ಪಾಲ್ಗೊಳ್ಳುವಿಕೆ ಅತ್ಯಗತ್ಯ
ಸಂಘದ ಮಾಹಾಸಭೆಯ ವರದಿಯನ್ನು ಉಪಾಧ್ಯಕ್ಷರಾದ ತಿಮ್ಮಪ್ಪ ಖಾರ್ವಿ ರವರು ವಾಚಿಸಿದರು, ಸಂಘದ ಆಯವ್ಯಯವನ್ನು ಪ್ರದಾನ ಕಾರ್ಯದರ್ಶಿಯವರಾದ ಸುರೇಶ್ ಖಾರ್ವಿವರು ಮಂಡನೆ ಮಾಡಿದರು

ಮರಣ ಹೊಂದಿದ ಸಂಘದ ಸದಸ್ಯರ ಮನೆಯವರಿಗೆ ರಾಣಿ ಬಲೆ ಒಕ್ಕೂಟದಿಂದ ತಲಾ 95000/ರೂಪಾಯಿ,  ಮರಣೋತ್ತರ ಚೆಕ್ ವಿತರಣೆ ಮಾಡಿದರು.

ಸಂಘದ ಸದಸ್ಯರಿಗೆ ಲಕ್ಕಿ ಕೂಪನ್  ಡ್ರಾ ಮೂಲಕ ಹತ್ತು ಜನ  ಅದೃಷ್ಟ ಶಾಲಿಗಳನ್ನು ಆಯ್ಕೆ ಮಾಡಿ ಬಹುಮಾನ ವಿತರಣೆ ಮಾಡಲಾಯಿತು,
ಉಪಾಧ್ಯಕ್ಷರಾದ ತಿಮ್ಮಪ್ಪ ಖಾರ್ವಿ,    ಪ್ರದಾನ ಕಾರ್ಯದರ್ಶಿ ಸುರೇಶ್ ಖಾರ್ವಿ,   ಕೋಶಾಧಿಕಾರಿ ಬಿ ನಾಗೇಶ್ ಖಾರ್ವಿ,  ಜೊತೆ ಕಾರ್ಯದರ್ಶಿ ಸೊಮಶೇಖರ ಖಾರ್ವಿ,   ಕಾರ್ಯಕಾರಿ ಸದಸ್ಯರಾದ ಎ ಶ್ರೀನಿವಾಸ ಖಾರ್ವಿ,ಎಸ್ ಕೃಷ್ಣ ಖಾರ್ವಿ, ರಾಜೇಂದ್ರ ಖಾರ್ವಿ,ಶಂಕರ್ ಖಾರ್ವಿ,ನವೀನ್ ಖಾರ್ವಿ,  ಶರತ್ ಖಾರ್ವಿ ಮತ್ತು ಸಂಘದ ಸದಸ್ಯರು  ಮತ್ತು  ದೋಣಿಯ  ಸದಸ್ಯರು ಉಪಸ್ಥಿತರಿದ್ದರು

ರವೀಂದ್ರ ಖಾರ್ವಿ ಮತ್ತು ಕಿರಣ್ ಪ್ರಾರ್ಥನೆ ಗೈದರು,

ಸುಬ್ರಹ್ಮಣ್ಯ ಎಂ ನಿರೂಪಣೆಯನ್ನು ಮಾಡಿದರು

About The Author

Leave a Reply

Your email address will not be published. Required fields are marked *