October 23, 2025
img-20250929-wa00414114750366833048683.jpg
ವಿಶು ಶೆಟ್ಟಿ ಅವರಿಂದ ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಯ ರಕ್ಷಣೆ : ಸಂಬAಧಿಕರ ನೆರವಿಗೆ ಕಣ್ಣೀರಿಡುತ್ತಿರುವ ರೋಗಿ ಉಡುಪಿ : ಶಿರ್ವ ಠಾಣಾ ವ್ಯಾಪ್ತಿಯ ಕಟ್ಟಿಂಗೇರಿ ಎಂಬಲ್ಲಿ ಬಸ್‌ ನಿಲ್ದಾಣದಲ್ಲಿ ತೀರಾ ಅನಾರೋಗ್ಯದಿಂದ ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿ ಜಿಲ್ಲಾಸ್ಪತ್ರೆಗೆ ಸೋಮವಾರ ದಾಖಲಿಸಿದ್ದಾರೆ.
ರೋಗಿಯನ್ನು ಶಿರ್ವ ಮಟ್ಟಾರ್ ನಿವಾಸಿ ಗಂಗಾಧರ ಪೂಜಾರಿ (೫೪) ಎಂದು ಗುರುತಿಸಲಾಗಿದ್ದು, ಹೈಡ್ರಾಸಿಲ್ ಸಮಸ್ಯೆಯಿಂದ ಬಳಲುತ್ತಿದ್ದು,ತುರ್ತು ಶಸ್ತçಚಿಕಿತ್ಸೆಯ ಆವಶ್ಯಕತೆಯಿದೆ.
ವ್ಯಕ್ತಿ ಯಾವುದೋ ಕಾರಣದಿಂದ ತನ್ನವರಿಂದ ದೂರವಾಗಿದ್ದು, ೩ ವರ್ಷ ಬಸ್‌ ನಿಲ್ದಾಣದಲ್ಲಿ ಕಳೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ಅಧಾರ್ ಕಾರ್ಡ್ನಲ್ಲಿ ಹೆಸರು ಗಂಗಾಧರ ಪೂಜಾರಿ, ತಂದೆಯ ಹೆಸರು ಶೇಖರ ಪೂಜಾರಿ ಎಂಬ ಮಾಹಿತಿಯಿದೆ.
ರಕ್ಷಣೆಯ ಸಂದರ್ಭದಲ್ಲಿ ಅಣ್ಣಾ.. ಅಣ್ಣಾ ಎಂದು ಕರೆಯುತ್ತಾ ತೀರಾ ಅನಾರೋಗ್ಯದಲ್ಲಿರುವ ನನ್ನನ್ನು ವಿಶು ಶೆಟ್ಟಿ ಅವರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ನನಗೆ ನಿಮ್ಮ ನೆರವಿನ ಆವಶ್ಯಕತೆಯಿದೆ. ಕೂಡಲೇ ಜಿಲ್ಲಾಸ್ಪತ್ರೆಗೆ ಬನ್ನಿ. ನನ್ನನ್ನು ಬದುಕಿಸಿ ಎಂದು ಅವರು ತನ್ನ ಕುಟುಂಬಿಕರ ನೆರವಿಗೆ ಮೊರೆ ಇಡುತ್ತಿರುವುದು ನೋಡುಗರ ಕಣ್ಣೀರು ತರಿಸುವಂತಿದೆ.
ವ್ಯಕ್ತಿಯ ಸಂಬAಧಿಕರು ಅಥವಾ ವಾರೀಸುದಾರರು ತುರ್ತಾಗಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸುವAತೆ ವಿಶು ಶೆಟ್ಟಿ ವಿನಂತಿಸಿದ್ದಾರೆ. ವ್ಯಕ್ತಿಯ ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ಥಳೀಯರಾದ ರಾಜೇಶ್ ಆಚಾರ್ಯ ಹಾಗೂ ಮತ್ತಿತರರು ನೆರವಾದರು.
ಫೋಟೊ ಲಗತ್ತಿಸಿದೆ.

About The Author

Leave a Reply

Your email address will not be published. Required fields are marked *