ಸ.ಹಿ.ಪ್ರಾ.ಶಾಲೆ ಹೊಸಾಳ ಬಾರ್ಕೂರು; ಉಚಿತ ನೋಟ್ ಪುಸ್ತಕ ಮತ್ತು ಕಲಿಕೋಪಕರಣ ವಿತರಣೆ; ಅಂತರಾಷ್ಟ್ರೀಯ ಯೋಗದಿನಾಚರಣೆ ಆಚರಣೆ

ಬಾರ್ಕೂರು : ದಿನಾಂಕ 21/06/2025ರಂದು ಇಂದು ಸಂಸ್ಥೆಯ ವಿದ್ಯಾರ್ಥಿಗಳಿಗೆ ಪೂರ್ತಿ ವರ್ಷಕ್ಕಾಗುವಷ್ಟು ನೋಟ್‌ಪುಸ್ತಕವನ್ನು ದಾನಿಗಳಾದ ಕಿರಣ್ ಪೂಜಾರಿ, ಕರ್ನಾಟಕ ರಾಜ್ಯ ಪತ್ರಿಕೋದ್ಯಮ ಸಂಘ (ರಿ.), ಉಡುಪಿ ಜಿಲ್ಲಾ ಅಧ್ಯಕ್ಷರು., ಪ್ರವೀಣ ನಾಗರಮಠ ಗ್ರಾ.ಪಂ. ಸದಸ್ಯರು ಬಾರ್ಕೂರು, ಜಯಶಂಕ‌ರ್ ಪೂಜಾರಿ ಕೂಡ್ಲಿ. ಶಂಕರಾಚಾರ್ಯ ದತ್ತಿ ನಿಧಿಯ ಕಲಿಕೋಪಕರಣ ಪ್ರಾಯೋಜಕರು

ಶ್ರೀ ಗಣೇಶ ಆಚಾರ್ಯ ಹಸ್ತಾಂತರ ಮಾಡಿದರು.

ಎಸ್ .ಡಿ .ಎಮ್.ಸಿ ಅಧ್ಯಕ್ಷ ಮಂಜುನಾಥ ಆಚಾರ್ಯ, ಉಪಾಧ್ಯಕ್ಷೆ ಉಷಾ, ಪಂಚಾಯಿತಿಯ ಸದಸ್ಯರಾದ ಅಶ್ವಿನಿ, ಹಳೆವಿದ್ಯಾರ್ಥಿಸಂಘದ ಶ್ರೀನಿವಾಸ ನಾಗರಮಠ, ಪೋಷಕರು, ಎಸ್ ಡಿ ಎಮ್ ಸಿ ಸದಸ್ಯರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಶ್ಯಾಮ ಸುಂದರ ಶೆಟ್ಟಿ ಸ್ವಾಗತಿಸಿ, ಶಿಕ್ಷಕಿಯರಾದ ಪಾರ್ವತಿ, ಕಲಾವತಿ, ಸೌಮ್ಯ ಸಹಕರಿಸಿದರು, ಗೀತಾ ಎನ್ ವಂದಿಸಿದರು. ದಾನಿಗಳನ್ನು ಗೌರವಿಸಲಾಯಿತು

ವರದಿ,; ಜನಾರ್ದನ ಕೆ ಎಂ ಮರವಂತೆ

About Janardhana K M

Check Also

ಮಲ್ಪೆ: ಕಡಲು ಪ್ರಕ್ಷುಬ್ಧ- ನಾಡ ದೋಣಿ ಮಗುಚಿ ಬಿದ್ದು ಮೀನುಗಾರ ಸಾವು

ಬೈಂದೂರು;ಮಲ್ಪೆ ನಾಡ ದೋಣಿ ಮಗುಚಿ ಬಿದ್ದ ಪರಿಣಾಮ ಮೀನುಗಾರ ಸಾವನ್ನಪ್ಪಿದ ಘಟನೆ ಉಡುಪಿಯ ಪಡುಕೆರೆ ಕಡಲ ತೀರದಲ್ಲಿ ಇಂದು ಸಂಭವಿಸಿದೆ.ಪಿತ್ರೋಡಿ …

Leave a Reply

Your email address will not be published. Required fields are marked *