Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಬೈಂದೂರು: ತಾಲೂಕಿನ ವಿವಿಧೆಡೆ ಗುರುವಾರ ಸಂಜೆ ಸುರಿದ ಸಿಡಿಲು ಸಹಿತ ಭಾರೀ ಗಾಳಿ ಮಳೆಗೆ 15ಕ್ಕೂ ಹೆಚ್ಚು ಕಡೆಗಳಲ್ಲಿ ಆಸ್ತಿಪಾಸ್ತಿ ನಷ್ಟವಾಗಿದೆ.

ಬೈಂದೂರು ತಾಲೂಕು ಉಪ್ಪುಂದದ ಸುತ್ತ ಮುತ್ತ ಪ್ರದೇಶದಲ್ಲಿ ಸಿಡಿಲು ಬಡಿದು ಹೆಚ್ಚಿನ ಮನೆಯ ಟಿವಿ ಫ್ರೀಜ್ ಇತರ ಎಲೆಕ್ಟ್ರಾನಿಕ್ಸ್ ಹಾನಿಯಾಗಿದ್ದು, ಮತ್ತು ಕಳವಾಡಿ ಶ್ರೀ ಮಾರಿಕಾಂಬಾ ದೇಗುಲದ ಎದುರು 15 ಲಕ್ಷ ರೂ. ವ್ಯಯ ಮಾಡಿ ನಿರ್ಮಿಸಿರುವ ಊಟದ ಹಾಲ್‌ನ ಮೇಲ್ಬಾವಣಿ ಹಾರಿ ಬಿದ್ದಿದೆ.

ಬೈಂದೂರು ಪೊಲೀಸ್‌ ಠಾಣೆಯ ಆವರಣದಲ್ಲಿ ಹಳೆ ವೃತ್ತ ನಿರೀಕ್ಷಕರ ಕಚೇರಿಯ ಮೇಲೆ ಮರ ಉರುಳಿದೆ. ಪಡುವರಿ ಗ್ರಾಮದ ದೊಂಬೆ ಕೋಟಿಮನೆ ಕೊಲ್ಲೂರಿ ಪೂಜಾರ್ತಿ ಮನೆ ಮೇಲೆ ಮರ ಬಿದ್ದಿದೆ. ಛಾವಣಿ ಕುಸಿತ, ಮರ ಉರುಳಿರುವುದು, ಉಪ್ಪುಂದದ ಬಾರಿ ಗ್ರಾತದ ಎರಡು ಮರಗಳು ನೆಲಕ್ಕೆ ಉರುಳಿವುದು ಸೇರಿದಂತೆ ವಿವಿಧ 15ಕ್ಕೂ ಹೆಚ್ಚಿನ ಅವಘಡ ದಾಖಲಾಗಿದೆ. ಬೈಂದೂರಿನಾದ್ಯಂತ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.

 

 

About The Author

Leave a Reply

Your email address will not be published. Required fields are marked *