
ಬೈಂದೂರು ;ದೇಶದ ದಕ್ಷಿಣ ಮತ್ತು ಮಧ್ಯ ಭಾಗಗಳಿಗೆ ನಿರೀಕ್ಷಿತ ಸಮಯದಲ್ಲೇ ಪ್ರವೇಶ ಮಾಡಬೇಕಿದ್ದ ನೈಋತ್ಯ ಮುಂಗಾರು ಮಾರುತಗಳು, ಇದೀಗ ದಿಢೀರನೆ ದುರ್ಬಲಗೊಂಡಿವೆ. ಜೂನ್ ತಿಂಗಳಲ್ಲಿ ಬರಬೇಕಿದ್ದ ಮಳೆ ಮಾಯಾ ವಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ,ಉಪಗ್ರಹ ಚಿತ್ರಗಳು ಮತ್ತು ಭಾರತೀಯ ಹವಾಮಾನ ಇಲಾಖೆಯ (IMD) ತಾಜಾ ಡೇಟಾ ಪ್ರಕಾರ, ಭಾರತದ ಬಹುಪಾಲು ಭಾಗಗಳಲ್ಲಿ ಮುಂಗಾರು ಮಳೆ ಸಂಪೂರ್ಣವಾಗಿ ಸ್ಥಗಿತಗೊಂಡಿರುವುದು ಪತ್ತೆಯಾಗಿದೆ. ಇತ್ತೀಚಿನ ದಿನಗಳವರೆಗೂ ಸಕ್ರಿಯವಾಗಿದ್ದ ಮುಂಗಾರು ಮೋಡಗಳು ಈಗ ಉಪಗ್ರಹದ ಕಣ್ಣಿಗೂ ಸಿಗದೇ ಮರೆಯಾಗಿರುವುದು ದೇಶದ ಕೃಷಿ ವಲಯದಲ್ಲಿ ಅಲ್ಲೊಲಕ ಉಂಟಾಗಬಹುದು,
