
ಯುವಕ ಸಾಗರ (24) ಒಡಿಸ್ಸಾ ಮೂಲದವನಾಗಿದ್ದು ಆಕಸ್ಮಿಕ ಮನೋರೋಗಿಯಾಗಿ ಉಡುಪಿಗೆ ಬಂದಿದ್ದು ನಿಟ್ಟೂರಿನ ಮನೆಗಳಿಗೆ ಪ್ರವೇಶಿಸಿ ಭಯದ ವಾತಾವರಣ ಸೃಷ್ಟಿಸಿದ್ದ. ಸ್ಥಳೀಯ ನಗರಸಭಾ ಸದಸ್ಯೆ ಶ್ರೀಮತಿ ಸಂಪಾ ವಿನಂತಿ ಮೇರೆಗೆ ವಿಶು ಶೆಟ್ಟಿ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.
ಇದೀಗ ಮಾಹಿತಿ ಪಡೆದ ಸಹೋದರ ಹಾಗೂ ಸಂಬಂಧಿಕರು ಉಡುಪಿಗೆ ಬಂದಿದ್ದು ತಮ್ಮ ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ.
