
ಗಾಳಿಗೆ ಸಿಲುಕಿ ಮುಳುಗಡೆಯಾಗುವ ಅಪಾಯದಲ್ಲಿದ್ದ ಸುರಕ್ಷಿತವಾಗಿ ದಡಕ್ಕೆ ತರಲಾಗಿದೆ. ಮೀನುಗಾರಿಕಾ ಬೋಟ್ನ ರಕ್ಷಣಾ ಕಾರ್ಯದ ದೃಶ್ಯ ಮೈ ಜುಮ್ಮೆನ್ನಿಸುತ್ತದೆ, ಮೀನುಗಾರರು ಜೀವನ ಹಂಗನ್ನೇ ತೊರೆದು ಕಡಲಲ್ಲಿ ಸಾಹಸ ನಡೆಸುತ್ತಾರೆ ಎನ್ನುವುದಕ್ಕೇ ಇದೊಂದು ಉದಾಹರಣೆ. ಇಂದು ಸಂಭವಿಸಿದ ಈ ಘಟನೆಯಲ್ಲಿ ಮೀನುಗಾರರ ಸಮಯ ಪ್ರಜ್ಞೆಯಿಂದ ಯಾವುದೇ ಪ್ರಾಣಹಾನಿ
ಸಂಭವಿಸಿಲ್ಲ. ಅಪಾಯದಲ್ಲಿದ್ದ 27 ಮಂದಿಯನ್ನು ಸುರಕ್ಷಿತವಾಗಿ ದಡಕ್ಕೆ ಕರೆತರಲಾಗಿದೆ.
ಗಂಗೊಳ್ಳಿಯಿಂದ ಸುಮಾರು 3 ನಾಟಿಕಲ್ ಮೈಲಿ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಭಾರಿ ಅಲೆಗಳ ಹೊಡೆತಕ್ಕೆ ಬೋಟ್ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಗಂಗೊಳ್ಳಿಯ ಕರಾವಳಿ ಕಾವಲು ಪಡೆ ತಕ್ಷಣ ಕಾರ್ಯಪ್ರವೃತ್ತವಾಗಿ ಕಾರ್ಯಚಾರಣೆ ನಡೆಸಿದೆ.












Leave a Reply