
ಸಿದ್ದಾಪುರದ ಮಂಗನಸಾಲು ಎಂಬಲ್ಲಿ 2018ರಿಂದಲೂ ಶ್ರೀಧರ್ ಶೆಟ್ಟಿ ಮತ್ತು ಗುಲಾಬಿ ಶೆಟ್ಟಿ ಎಂಬುವವರು ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂದು ಸುದರ್ಶನ್ ಶೆಟ್ಟಿ ಎಂಬುವವರು ನಿರಂತರವಾಗಿ ದೂರು ನೀಡುತ್ತಾ ಬಂದಿದ್ದಾರೆ. ಗ್ರಾಮ ಪಂಚಾಯತ್ ಮತ್ತು ತಹಶೀಲ್ದಾರ್ ಅವರು ಹಲವು ಬಾರಿ ನೋಟಿಸ್ ನೀಡಿದ್ದರೂ, ಒತ್ತುವರಿದಾರರು ಕಾನೂನಿಗೆ ಬೆಲೆ ನೀಡದೆ ಕಾಮಗಾರಿ ಮುಂದುವರಿಸಿದ್ದಾರೆ ಎನ್ನಲಾಗಿದೆ.
ದೂರುದಾರರಾದ ಕಿರಣ್ ಪೂಜಾರಿ ಅವರ
ಪ್ರಕಾರ, ಈ ಪ್ರಕರಣದಲ್ಲಿ ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಒತ್ತುವರಿದಾರರೊಂದಿಗೆ ಶಾಮೀಲಾಗಿದ್ದಾರೆ: ಸುಳ್ಳು ವರದಿ ಸಲ್ಲಿಕೆ: ಭೂಕಬಳಿಕೆ ನ್ಯಾಯಾಲಯದಲ್ಲಿ ಪ್ರಕರಣ ಇಲ್ಲದಿದ್ದರೂ, ಇದೆ ಎಂದು ಉಪಲೋಕಾಯುಕ್ತರಿಗೆ ಆರ್. ಐ. ರಾಘವೇಂದ್ರ ಅವರು ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಒತ್ತಡಕ್ಕೆ ಮಣಿದ ಅಧಿಕಾರಿಗಳು: ಸರ್ಕಾರಿ ನೌಕರರ ಸಂಘದ ಮಾಜಿ ಪದಾಧಿಕಾರಿ ಪ್ರಕಾಶ್ ಚಂದ್ರ ಶೆಟ್ಟಿ ಎಂಬುವವರು ಅಧಿಕಾರಿಗಳ ಮೇಲೆ ಒತ್ತಡ ಹೇರಿ, ತೆರವು ಕಾರ್ಯಾಚರಣೆಯನ್ನು ವಿಳಂಬ ಮಾಡುತ್ತಿದ್ದಾರೆ ಎನ್ನಲಾಗಿದೆ.
ನ್ಯಾಯಾಂಗ ನಿಂದನೆ: ಮಾರ್ಚ್ 26ರೊಳಗೆ ತೆರವುಗೊಳಿಸುವಂತೆ ಉಪಲೋಕಾಯುಕ್ತರು ನೀಡಿದ್ದ ಆದೇಶವನ್ನು ತಹಶೀಲ್ದಾರ್ ಪ್ರದೀಪ್ ಕುರಡೇಕಾರ್ ಮತ್ತು ಸಿಬ್ಬಂದಿಗಳು ಪಾಲಿಸದೆ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಿಸಿಟಿವಿ ಮತ್ತು ಕಾಲ್ ರೆಕಾರ್ಡ್ ಪರಿಶೀಲನೆ: ಕಳೆದ 10 ದಿನಗಳ ಅಧಿಕಾರಿಗಳ ಫೋನ್ ಕರೆಗಳು ಮತ್ತು ತಹಶೀಲ್ದಾರ್ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರೆ ಅಧಿಕಾರಿಗಳ ಮತ್ತು ಒತ್ತುವರಿದಾರರ ನಡುವಿನ ಆಪ್ತತೆ ಬಯಲಾಗುತ್ತದೆ
ಕಾನೂನು ಕ್ರಮ: ಅಕ್ರಮ ಒತ್ತುವರಿ ಮಾಡಿದವರ ಮೇಲೆ 192(A) ಹಾಗೂ ಅದಕ್ಕೆ ಕುಮ್ಮಕ್ಕು ನೀಡಿದ ಪ್ರಕಾಶ್ ಚಂದ್ರ ಶೆಟ್ಟಿ ಮೇಲೆ 192(B) ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು.
ಜೀವ ರಕ್ಷಣೆ: ಈ ಹಿಂದೆ ದೂರುದಾರರ ಮೇಲೆ ಹಲ್ಲೆ ನಡೆದಿರುವ ಹಿನ್ನೆಲೆಯಲ್ಲಿ, ತಮಗೆ ಜೀವ ರಕ್ಷಣೆ ನೀಡಬೇಕು ಎಂದು ಕಿರಣ್ ಪೂಜಾರಿ ಮನವಿ ಮಾಡಿದ್ದಾರೆ.
ಸರ್ಕಾರಿ ಭೂಮಿಯನ್ನು ಉಳಿಸಬೇಕಾದ ಅಧಿಕಾರಿಗಳೇ ಒತ್ತುವರಿದಾರರ ಪರ ನಿಂತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಉಪಲೋಕಾಯುಕ್ತರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಿದೆ.













Leave a Reply