Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಅಸಹಾಯಕ ಮಹಿಳೆ ರಕ್ಷಣೆ

ಜಿಲ್ಲಾ ಆಸ್ಪತ್ರೆಗೆ ದಾಖಲು ;ವಿಶು ಶೆಟ್ಟಿ

ಉಡುಪಿ ಮಾ.12, ಹಿರಿಯಡ್ಕ ಠಾಣಾ ವ್ಯಾಪ್ತಿಯ ಆತ್ರಾಡಿಯ ಮನೆಯೊಂದರಲ್ಲಿ ಕಳೆದ ಆರು ತಿಂಗಳಿಂದ ಎದ್ದೇಳಲಾಗದೆ ಮಲಗಿದ್ದಲ್ಲೇ ಇದ್ದ ಮಹಿಳೆಯೊಬ್ಬರನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಶುಚಿಗೊಳಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಮಹಿಳೆ ವಸಂತಿ ಪೂಜಾರಿ (65) ಎದ್ದೇಳಲಾಗದೆ ಮಲಗಿದ್ದಲ್ಲಿಯೇ ಕಳೆದ ಆರು ತಿಂಗಳಿನಿಂದ ಹಾಸಿಗೆ ಹಿಡಿದಿದ್ದು ಶೌಚಾದಿ ಕೂಡ ಮಲಗಿದ್ದಲ್ಲಿ ಆಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ವಿಶು ಶೆಟ್ಟಿ, ಸ್ಥಳೀಯ ಪಂಚಾಯಿತಿ ಸದಸ್ಯ ರತ್ನಾಕ‌ರ್ ಶೆಟ್ಟಿ ಸಹಾಯದಿಂದ ರಕ್ಷಿಸಿ ಜಿಲ್ಲಾಸ್ಪತ್ರೆ ದಾಖಲಿಸಿದ್ದಾರೆ. ಮಹಿಳೆಯ ಮಗ ತೀರಿಕೊಂಡಿದ್ದು ಸಹೋದರಿಯೊಬ್ಬರು ತೀವ್ರ ಮಾನಸಿಕ ರೋಗದಿಂದ ಬಳಲುತ್ತಿದ್ದಾರೆ.
ಹಿರಿಯ ನಾಗರಿಕ ಸಹಾಯವಾಣಿ ಹಾಗೂ ಹಿರಿಯಡ್ಕ ಠಾಣೆಗೆ ಮಾಹಿತಿ ನೀಡಲಾಗಿದೆ. ಸ್ಪಂದಿಸುವವರು ಜಿಲ್ಲಾಸ್ಪತ್ರೆ ಸಂಪರ್ಕಿಸಬಹುದು

About The Author

Leave a Reply

Your email address will not be published. Required fields are marked *