Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಮರವಂತೆ ಮೀನುಗಾರ ಸಹಕಾರಿ ಸಂಘದ   84ನೇ ವಾರ್ಷಿಕ ಸಭೆ ರವಿವಾರ ನಡೆಯಿತು

ಇದರ ವಾರ್ಷಿಕ ಮಹಾ ಸಭೆ ಸಂಘದ ಕಚೇರಿಯಲ್ಲಿ ನಡೆಯಿತು ಪ್ರವೀಣ್ ಖಾರ್ವಿ ಯವರ ಅಧ್ಯಕ್ಷತೆಯನ್ನು ನಡೆಯಿತು  25 ಮತ್ತು 26ನೇ ಸಾಲಿನ ವಾರ್ಷಿಕ ವರದಿಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗಾಧ‌ರ್ ಅವರು ವಾಚಿಸಿದರು, 25 ,26 ನೇ ಸಾಲಿನ ಆಯವ್ಯಕ್ಕಿಂತ ಹೆಚ್ಚಿಗೆ ಖರ್ಚಾದ ಪಟ್ಟಿಯನ್ನು    ದಿಲೀಪ್‌ ಅವರು ವಾಚಿಸಿದರು, 26, 27ನೇ ಸಾಲಿನ ಅಂದಾಜು  ಆಯವ್ಯಯದ ಪತ್ರದ ಮಂಡನೆ ಗಂಗಾಧರ್ ಅವರು ವಾಚಿಸಿದರು,  25,26  ಸಾಲಿನ  ನ್ಯೂನ್ಯತೆ ಯು ಬಗ್ಗೆ ಭಾಗ್ಯಲಕ್ಷ್ಮಿ ರವರು ವಾಚಿಸಿದರು, ಹಾಗೆಯೇ ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೀನುಗಾರಿಕ ನಿರ್ದೇಶಿಕರಾಗಿರುವ ಇಂದಿರಾ ಮೆಂಡನ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು

ಹಾಗೆಯೇ ಎಸ್ ಎಸ್ ಎಲ್ ಸಿಯಲ್ಲಿ ತಾಲೂಕಿಗೆ 2ನೇ     ರಾಂಕ್ ಪಡೆದ ಸಮನ್ವಿ ಮೋಗವೀರ  ಅವರನ್ನು ಗೌರವಿಸಿ ಸನ್ಮಾನಿಸಲಾಯಿತು ಮತ್ತು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ರಾದ ಪ್ರವೀಣ್ ಮುಂದಿನ ದಿನಗಳಲ್ಲಿ ಸಂಘದ ಸದಸ್ಯರಿಗೆ ಡಿವಿಡೆಂಡ್ ಬಗ್ಗೆ ಚರ್ಚಿಸಲಾಯಿತು ಸಂಘದ ಸಾಧನೆ ಯ ಬಗ್ಗೆ ಎಳೆ ಎಳೆಯ ಆಗಿ ವಿವರಿಸಿದರು.

ಸಂಘದ ಅಧ್ಯಕ್ಷರಾದ ಪ್ರವೀಣ್ ಖಾರ್ವಿ ಮತ್ತು ಉಪಾಧ್ಯಕ್ಷರಾದ ರತ್ನಾಕರ ದೇವರನ್ನು ಸನ್ಮಾಸಿಲಾಯಿತು

ಈ ಸ ಂದರ್ಭದಲ್ಲಿ   ಶ್ರೀ ರಾಮ ಸೇವಾ ಸಮಿತಿಯ ಅಧ್ಯಕ್ಷರಾದ ಬಿ ಸುರೇಶ್  ಖಾರ್ವಿ, ಮಾಜಿ ಅಧ್ಯಕ್ಷರಾದ ವೆಂಕಟರಮಣ ಖಾರ್ವಿ, ಪಿ ಚಂದ್ರ ಖಾರ್ವಿ, ಸೋಮಯ್ಯ ಖಾರ್ವಿ ,  ಮೋಹನ , ಶಂಕರ ಖಾರ್ವಿ,ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ಕೆ ಚಂದ್ರಶೇಖರ   ಅಣ್ಣಪ್ಪ ಖಾರ್ವಿ ,ಬೈಂದೂರು ವಲಯ ನಾಡ ದೋಣಿ ಮಾಜಿ ಅಧ್ಯಕ್ಷರಾದ ಸೋಮಶೇಖ‌ರ್ ಕೆ ಎಂ   ಸೇವಾ ಸಮಿತಿಯ  ಉಪಾಧ್ಯಕ್ಷರಾದ ನಾರಾಯಣ ಮತ್ತು ಗ್ರಾಮ  ಪಂಚಾಯತ್ ಮಾಜಿ ಅಧ್ಯಕ್ಷರಾದ ನಾಗರಾಜ್, ಬಿಜೆಪಿ ಮಂಡಲದ ಅಧ್ಯಕ್ಷ ರಾದ ಅನಿತಾ ಆರ್ ಕೆಇತರ ಸದಸ್ಯರು ಉಪಸ್ಥಿತರಿದ್ದರು

ಸಂಘದಲ್ಲಿ ಸಕ್ರಿಯವಾಗಿ ವಾಗಿ ಪಾಲ್ಗೊಂಡ ಮಹಿಳಾ ಸಂಘದ ಸದಸ್ಯರಿಗೆ ಗೌರವಿಸಲಾಯಿತು ಸಂಘದ ನಿರ್ದೇಶಕರಾದ ಜನಾರ್ಧನರವರು ನಿರೂಪಣೆಗೈದರು

About The Author

Leave a Reply

Your email address will not be published. Required fields are marked *