ಬೈಂದೂರು ತಾಲೂಕು, ಮರವಂತೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮಾರುತಿ ಕಾಂಪ್ಲೆಕ್ಸ್ ನ ಮಾಂಗಲ್ಯ ಜೆವೆಲ್ಲೆರ್ಸ್ ಬಾಗಿಲು ಒಡೆದು ಕಳ್ಳತನ ಮಾಡಿ ಪರಾರಿಯಾಗಿ ರುತ್ತಾರೆ, ಅಂದಾಜು ತಿಳಿದು ಬಂದಿಲ್ಲ, ಮಧ್ಯರಾತ್ರಿಯ ಸಮಯದಲ್ಲಿ ಮಳೆರಾಯನ ಅರ್ಭಟಕ್ಕೆ ನುಗ್ಗಿದ ಕಳ್ಳರು ಪಕ್ಕದ ನಾಲ್ಕು ಅಂಗಡಿಯ ಸಿಸಿ ಕ್ಯಾಮೆರಾ ಜಕುಂ ಗೊಳಿಸಿ ಚಿನ್ನದ ಅಂಗಡಿಯ ಚಟರ್ ಅನ್ನು ಹೊಡೆದು ಒಳ ನುಗ್ಗಿ ಚಿನ್ನ ಮತ್ತು ಬೆಳ್ಳಿಯನ್ನು ದೋಚಿ ಕೊಂಡು ಪರಾರಿಯಾಗಿರುತ್ತಾರೆ, ಗಂಗ್ಗೊಳ್ಳಿ ಠಾಣೆಯ ಪಿಎಸ್ಐ ಮತ್ತು ಬೆರಳಚ್ಚುಗಾರರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ